Friday, October 12, 2018


Image may contain: 1 person



ನೀಳ ಕಣ್ಗಳು ಕಾಡುತಿವೆ
ಕಿರು ನಗೆ‌ ಮನವ ಮರ್ಕಟಗೊಳಿಸಿದೆ
ಮಧು ತುಂಬಿದ ಕೆಂದುಟಿಗಳು
ಕಚ್ಚಿ ಬಿಡಲೇ ಮೆಲ್ಲಗೆ ನೀ ಕಣ್ಮುಚ್ಚಲು😜
ನವಿರಾದ ಹಣೆಗೆ ಮುತ್ತಿಕ್ಕಲು
ಅಖಿಲ ಬ್ರಹ್ಮಾಂಡ ಸೂರೆಗೊಂಡಿದೆ ಚಿನ್ನ ಆ ನಿನ್ನ
ಚೆಲುವು...!
ಕಾಳಿದಾಸನ ಕಾವ್ಯದ ಕಾಮಧೇನು
ರವಿವರ್ಮನ ಕುಂಚದ ಬಣ್ಣ ನೀನು
ನಿನ್ನ ಸಿಹಿ ದ್ವನಿಗೆ ಮರಳಾದೆನು
ನನಗೆಂದೆ ಆ ಬ್ರಹ್ಮ ಸೃಷ್ಟಿಸಿದ ನಿನ್ನನು..!
ತಳುಕು ಬಳುಕಿನ ನಡೆ ನಿನ್ನ
ಕನ್ನ ಹಾಕಿದೆ ನಿನ್ನ ಚೆಲುವಿಗೆ ಮನ
ಮೋಹ ಕವಿದಿದೆ ಮನಸು ಕಾದಿದೆ
ಮುದದಿ ಅಪ್ಪಿಕೊಳ್ಳುವೆ ನಿನ್ನ ‌ಮುಗುದೆ..,!
ನೂರು ಜನ್ಮವೆತ್ತರೂ ನನ್ನವಳಾಗು..
ನನ್ನ ಪುಟ್ಟ ಹೃದಯದ ಗೂಡಿಗೆ ರಾಣಿಯಾಗು..
ಪ್ರೇಮ ಕಾವ್ಯಕ್ಕೆ ದ್ವನಿಯಾಗು..
ಮುಸ್ಸಂಜೆ ವೇಳೆಗೆ ಬೆಳಕಾಗು..!

No comments:

Post a Comment