Friday, October 12, 2018

ಮತ್ತೆ ಹಂಚಿಕೊಳ್ಳಬೇಕೆನಿಸಿತು ಈ ಕವಿತೆಯ ಸಾಲುಗಳನ್ನು...! ಅತಿವೃಷ್ಟಿಯಿಂದ ಕೇರಳದಲ್ಲಿ ಉಂಟಾದ ಸಾವು ನೋವಿಗೆ ಸಂತಾಪವಿದೆ...!
(ಕೇರಳದಲ್ಲಿ ನಡು ಬೀದಿಯಲ್ಲಿ ಕರುವನ್ನು ಕಡಿದು ವಿಕೃತಿ ಮೆರೆದಾಗ ಬರೆದ ಕವಿತೆ)

ಕಡಿದು ಕೊಂದರೆನ್ನ ನಡು ಬೀದಿಯಲ್ಲಿ
ತಲೆಗೇರಿದ ರಾಜಕೀಯದ ಅಮಲಿನಲ್ಲಿ
ಉಳಿವಿಲ್ಲವೇ ನನಗೆ ಈ ಪುಣ್ಯ ಭೂಮಿಯಲ್ಲಿ ..?
ನನ್ನ ಮೂಕ ರೋಧನೆ ಆಲಿಸುವರಾರಿಲ್ಲಿ ..?
ಎಡ ಬಲ ಪಂಥಗಳ ಅರಿವಿಲ್ಲ ಎನಗೆ
ನನ್ನಲ್ಲಿರುವ ಎಲ್ಲವ ನೀಡಿದೆ ನಿನಗೆ
ಎಳೆದು ಕಟ್ಟದಿರಿ ನನ್ನ ಒಂದು ಧರ್ಮದ ಬುಡಕ್ಕೆ
ನಿಮ್ಮ ಸ್ವಾರ್ಥಕ್ಕೆ ಸಾಧಿಸದಿರಿ ನನ್ನ ಮೇಲೆ ಹಗೆ
ನಿಮ್ಮ ಹಿರಿಯರು ಪೂಜಿಸಿದರು ಎನ್ನ
ಪೂಜಿಸೆಂದು ನಾ ಕೇಳಿಲ್ಲ ಅವರನ್ನ
ಮೊಲೆ ಹಾಲು ಕೊಟ್ಟು ಪೋಷಿಸಿದೆ ನಿನ್ನ ಮಗುವನ್ನ
ಆದರೆ ಇಂದು ನಡು ಬೀದಿಯಲ್ಲಿ ಕತ್ತರಿಸಿದೆ ನನ್ನ ಕರುಳನ್ನ
ನನ್ನಲ್ಲಿರುವ ಎಲ್ಲವ ನಿನಗೆ ನೀಡಿದೆ
ಕಡೆಗೆ ನಾನದೆನೆ ನಿನಗೆ ಮಾಂಸದ ಮುದ್ದೆ ...?
ನಿನ್ನ ಹೆತ್ತಬ್ಬೆಯ ಎದೆ ಹಾಲುಂಡವನು ನೀನು
ನಾಳೆ ಅವಳನ್ನು ನನ್ನ ದಾರಿಗೆ ಅಟ್ಟುವೆಯೋ ಏನು ...!
ತಪ್ಪಿದ್ದಲ್ಲ ಎಲ್ಲರಿಗೂ ಸಾವು
ನೀನು ನೀಡಿದರೆ ನನ್ನ ವಂಶಕ್ಕೆ ನೋವು
ನೀಗಿತೆ ನಿನ್ನ ಕ್ರೌರ್ಯದ ಹಸಿವು..?
ಆದರೆ ನೆನಪಿಡು ಘನಘೋರವಾದೀತು ನಿನ್ನ ಸಾವು ..!
ರಾಜೇಶ್

No comments:

Post a Comment