Friday, October 12, 2018


Image may contain: 1 person, smiling


ಪಟ್ಟಾಭಿಷೇಕದ ಸುವರ್ಣ ಕಾಲವನ್ನು ಆಚರಿಸುತ್ತಿರುವ ಪೂಜ್ಯ ಖಾವಂದರಿಗೆ ಕವಿತೆಯ ನಮನ ..!
ಸಜ್ಜನಿಕೆಯ ಸಾಕಾರ ಮೂರ್ತಿ
ಬಡವರ ಪಾಲಿನ ಭಾಗ್ಯ ಜ್ಯೋತಿ
ನೊಂದವರ ಬಾಳಿಗೆ ಚಿಲುಮೆಯ ಸ್ಪೂರ್ತಿ
ವಿಶ್ವದೆಲ್ಲೆಡೆ ಹಬ್ಬಿದೆ ಈ ಮಹಾತ್ಮನ ಕೀರ್ತಿ
ದಾನ ಧರ್ಮ ನಡೆಯುವ ಕ್ಷೇತ್ರದಲಿ
ಮಂಜುನಾಥ ಸ್ವಾಮಿ ನೆಲೆಸಿರುವ ಧರ್ಮಸ್ಥಳದಲಿ
ಅಣ್ಣಪ್ಪನ ಮಹಿಮೆಯಿರುವ ಪುಣ್ಯ ಸನ್ನಿಧಿಯಲಿ ನಡೆಯುತಿದ್ದಾರೆ ಈ ಮಹಾತ್ಮ ನ್ಯಾಯ ನಿಷ್ಠೆಯಲಿ
ಈ ಮಹಾತ್ಮನಿಂದ ಬೆಳಗಿದ ಬೆಳಗಿದ ಜೀವಗಳೆಷ್ಟೋ
ಸಾಗಿಸುತಿವೆ ತಮ್ಮ ಸಂಸಾರ ರಥ ಇಷ್ಟಪಟ್ಟು ಇವರ ಕೃಪೆಯಿಂದ ಗ್ರಾಮ ಗ್ರಾಮಗಳಲಿ ರಚಿಸೆದೆವು ಪ್ರಗತಿಬಂಧು
ಇದರಿಂದ ಈ ಮಹಾತ್ಮನಾಗಿದ್ದಾನೆ ಬಡವರ ಬಂಧು
ಇವರ ಕಣ್ಣುಗಳಲಿ ಹೊಳೆಯುತಿದೆ ಕರುಣೆಯ ಸೆಳೆತ
ಇದನ್ನು ನೋಡಲು ಸಾವಿರಾರು ಜನರ ತುಡಿತ
ಬಂದವರನ್ನು ಪ್ರೀತಿಯಿಂದ ಸ್ವಾಗತಿಸುತ್ತ
ಪರಿಹರಿಸುತ್ತಾರೆ ಅವರ ನೋವ ಆಲಿಸುತ್ತ
ಇವರಿಂದ ಅದೆಷ್ಟೋ ಜೀವಗಳು ಪಡೆದಿವೆ ಸಾಕ್ಷಾತ್ಕಾರ
ಇದರಿಂದ ಈ ಮಹಾತ್ಮ ಜನರ ಸನ್ನಡತೆಯ ನೇತಾರ
ಒಲಿದು ಬಂದಿದೆ ಇವರಿಗೆ ಹಲವು ಪುರಾಸ್ಕಾರ
ಆಶಿಸುವೆವು ಸಾಗಲಿ ಇವರ ಪ್ರಯಾಣ ಸುಖಕರ ..!
ರಾಜೇಶ್

No comments:

Post a Comment