
ಸೃಷ್ಟಿಯ ಮೂಲ ಅನ್ನುತ್ತಾರೆ ನನ್ನ
ಅನ್ನುತ್ತಾರೆ ಕರುಣೆ ವಾತ್ಸಲ್ಯದ ಸಂಪನ್ನ
ವರ್ಣಿಸುವರು ಭೂಮಿ ತೂಕದ ತಾಳ್ಮೆ ನಿನ್ನ
ಇವೆಲ್ಲವೂ ನನ್ನ ಹೆಸರಿಗಿರುವ ಬಿರುದು ಸನ್ಮಾನ..!
ಅನ್ನುತ್ತಾರೆ ಕರುಣೆ ವಾತ್ಸಲ್ಯದ ಸಂಪನ್ನ
ವರ್ಣಿಸುವರು ಭೂಮಿ ತೂಕದ ತಾಳ್ಮೆ ನಿನ್ನ
ಇವೆಲ್ಲವೂ ನನ್ನ ಹೆಸರಿಗಿರುವ ಬಿರುದು ಸನ್ಮಾನ..!
ಆಗಸದಾಚೆ ಹಾರಿ ಬಂದಿರುವೆ
ಸಾಗರದ ಆಳ ಕಂಡಿರುವೆ
ಹೆಸರೆತ್ತಿದರೆ ನನ್ನ ಅಬಲೆಯೆನ್ನದಿರಿ..
ನನಗೂ ಗೊತ್ತಿದೆ ಬದುಕಿನ ದಾರಿ
ಸಾಗರದ ಆಳ ಕಂಡಿರುವೆ
ಹೆಸರೆತ್ತಿದರೆ ನನ್ನ ಅಬಲೆಯೆನ್ನದಿರಿ..
ನನಗೂ ಗೊತ್ತಿದೆ ಬದುಕಿನ ದಾರಿ
ಸಂಸಾರದ ಸರಿಗಮ ನಾನು
ನೀವಲ್ಲವೇ ಹೇಳಿದ್ದು ಸಮಾಜದ ಕಣ್ಣು ನೀನು
ಕಲ್ಯಾಣ ಸಬಲೀಕರಣ ಇನ್ನೂ ಏನೇನೋ..
ಆದರೂ ಕೇಳತ್ತಿಲ್ಲ ನನ್ನ ದುಃಖ ನಿಮಗಿನ್ನೂ...
ನೀವಲ್ಲವೇ ಹೇಳಿದ್ದು ಸಮಾಜದ ಕಣ್ಣು ನೀನು
ಕಲ್ಯಾಣ ಸಬಲೀಕರಣ ಇನ್ನೂ ಏನೇನೋ..
ಆದರೂ ಕೇಳತ್ತಿಲ್ಲ ನನ್ನ ದುಃಖ ನಿಮಗಿನ್ನೂ...
ಅಂದು ಮನುವೂ ವಿರೋಧಿಸಿದ ಎನ್ನ
ದುರುಳ ರಾವಣನು ಕಾಡಿದ್ದ ನನ್ನ
ಕುತಂತ್ರಿ ಶಕುನಿಯೂ ಮಾಡಿದ ಅವಮಾನ..
ಇಂದೂ ಕೆಲ ಪಿಶಾಚಿಗಳು ತೆಗೆಯುತ್ತಿವೆ ಎನ್ನ ಮಾನ ಪ್ರಾಣ...!
ದುರುಳ ರಾವಣನು ಕಾಡಿದ್ದ ನನ್ನ
ಕುತಂತ್ರಿ ಶಕುನಿಯೂ ಮಾಡಿದ ಅವಮಾನ..
ಇಂದೂ ಕೆಲ ಪಿಶಾಚಿಗಳು ತೆಗೆಯುತ್ತಿವೆ ಎನ್ನ ಮಾನ ಪ್ರಾಣ...!
ನಡು ರಾತ್ರಿ ಅಳೆಯುವ ಹಂಬಲವಿಲ್ಲ ನನಗೆ
ಆದರೆ ಅಡ್ಡಿಯಾಗದಿರಿ ಎನ್ನ ಗುರಿಯೆಡೆಗೆ
ನಿಮ್ಮ ಸಬಲೀಕರಣ ಭಾಷಣಕ್ಕೆ ಬೀಳಲಿ ಮಣ್ಣು
ಕೊನೆಗೂ ಹೆಸರು ಹೇಳಲು ಮರೆತೆ ನಾನು "ಹೆಣ್ಣು"
ಆದರೆ ಅಡ್ಡಿಯಾಗದಿರಿ ಎನ್ನ ಗುರಿಯೆಡೆಗೆ
ನಿಮ್ಮ ಸಬಲೀಕರಣ ಭಾಷಣಕ್ಕೆ ಬೀಳಲಿ ಮಣ್ಣು
ಕೊನೆಗೂ ಹೆಸರು ಹೇಳಲು ಮರೆತೆ ನಾನು "ಹೆಣ್ಣು"
ಕವಿತೆ :- ಕಾಲ್ಪನಿಕ
ಚಿತ್ರ ಕೃಪೆ : ಅಂತರ್ಜಾಲ
ಚಿತ್ರ ಕೃಪೆ : ಅಂತರ್ಜಾಲ
No comments:
Post a Comment