Wednesday, June 25, 2014

ಇದು ದೇಶದ ಒಬ್ಬ ಅತ್ಯುತ್ತಮ ಅರ್ಥ ಪಂಡಿತನನ್ನು ದುರ್ಬಲ ಗೊಳಿಸಿದ ಕಾಂಗ್ರೆಸ್ಸ್ ಗೆ ದೊರೆತ ಶಾಪವಲ್ಲವೆ...........?



ಲವು ದಿನಗಳಿಂದ ನನ್ನ ಮನಸಿನಲ್ಲಿ ಏನೋ ಕಸಿವಿಸಿ  ಏನೋ ಬರೆಯಬೇಕೆಂದು ಪೆನ್ನು ಕೈಗೆತ್ತಿಕೊಂಡಾಗ ಆ ವ್ಯಕ್ತಿಯನ್ನು ಜರಿದು ಬರೆಯಬೇಕಲ್ಲ ಎಂಬ ತಳಮಳ ಎಷ್ಟೇ ಪ್ರಯತ್ನಿಸಿದರೂ ಬರೆಯಲಾಗುತ್ತಿಲ್ಲ .. ಹೌದು ಆ ಒಬ್ಬ ವ್ಯಕ್ತಿಯ ಒಂದು ಪಾತ್ರವನ್ನು ಜರಿದು ಬರೆಯಬೇಕೆಂದರೆ ಇನ್ನೊಂದು ಪಾತ್ರ ಅಡ್ಡಿ ಬರುತಿತ್ತು ...... totali ..Confusion ........

      ನಾನು ಬರೆಯಬೇಕೆಂದು ಕೊಂಡದ್ದು ಇಡೀ ದೇಶ ಯಾರನ್ನು ದುರ್ಬಲ, ಅಸಮರ್ಥ, ಮೌನಿ ದುರಂತ ನಾಯಕನೆಂದು ಕರೆಯಿತೋ ... ಅವರೇ ಮನಮೋಹನ್ ಸಿಂಗ್ ....... ಮನಮೋಹನ್ ಸಿಂಗ್ ದೇಶವನ್ನು ದಶಕಗಳ ಕಾಲ ಆಳಿದ ಪ್ರಧಾನಿ .. ಹಲವಾರು ಬದಲಾವಣೆ ... ಯೋಜನೆಗಳಿಗೆ ಅಡಿಪಾಯ ಹಾಕಿದವರು . ಅನೇಕ ಭಾರತೀಯರು ಸಿಂಗ್ ಅವರನ್ನು ಕೇವಲ ಪ್ರಧಾನಿಯಾಗಿ ಕಂಡರೂ ಅವರೊಳಗಿನ ಒಬ್ಬ ಉತ್ತಮ ಅರ್ಥ ಪಂಡಿತನನ್ನು ಗುರುತಿಸುವಲ್ಲಿ ವಿಫಲರಾದರು.  
   
ದೇಶದ ಪ್ರಧಾನಿಯಾಗಿ ಸಿಂಗ್ ಅವ್ರ ಕಾರ್ಯ ವೈಖರಿಯನ್ನು ಹೊಗಳುವ ಕಾರ್ಯವನ್ನು ಖಂಡಿತ ನಾನು ಮಾದಲಾರೆ.... ಅಂತಹ ಘನ ಕಾರ್ಯವನ್ನೆನೂ ಅವರು ಮಾಡಿಲ್ಲ . ಹಗರಣಗಳ ಸರಮಾಲೆಯನ್ನೇ ತನ್ನ ಆಡಳಿತದ ಅವಧಿಯಲ್ಲಿ ಪೋಣಿಸಿದ ಸಿಂಗ್ ಅವರನ್ನು ಹೀಗೆ ಹೊಗಳಲಿ ..... .... ಆದರೇ ಇದೇ ಪ್ರಧಾನಿ ತಾವು ಒಬ್ಬ ಉತ್ತಮ ಅರ್ಥ ಪಂಡಿತರಾಗಿ ಹಣಕಾಸು ಮಂತ್ರಿಯಾಗಿದ್ದ ಅವಧಿಯಲ್ಲಿ ದೇಶವನ್ನು ದಿವಾಳಿಯನ್ಚಿನಿಂದ ಪಾರು ಮಾಡಿದ ಮಹಾನ್ ವ್ಯಕ್ತಿ ಎಂದು ನೆನೆಸಿಕೊಂಡಾಗ ಇವರೇನಾ ..... ಅವರು ಎಂದು ಅನುಮಾನ ಮೂಡುತ್ತದೆ . 

  ೧೯೯೧ ಅಂದಿನ ಪ್ರಧಾನಿಯಾಗಿದ್ದವರು ಪಿ . ವಿ . ನರಸಿಂಹರಾವ್ . ಅವರ ಅವಧಿಯಲ್ಲಿ ಮನಮೋಹನ್ ಸಿಂಗ್ ಅವರು ಹಣಕಾಸು ಮಂತ್ರಿಯಾಗಿ ಮಾಡಿದ ಕಾರ್ಯವನ್ನು ಇಡೀ ದೇಶದ ನೆನಪಿನಲ್ಲಿ ಉಳಿಯುವನ್ತದ್ದು . ಕಾಂಗ್ರೆಸ್ಸ್ ಪಕ್ಷದಿಂದ ಆಯ್ಕೆಯಾದ ಒಬ್ಬ ದಕ್ಷ ಪ್ರಧಾನಿ ನರಸಿಂಹರಾವ್ ಅವರು ಹಾಗೂ ಸಿಂಗ್  ಅವರು ಭಾರತೀಯ ಆರ್ಥಿಕ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿದರು . ದಿವಾಳಿಯತ್ತ ಸಾಗುತಿದ್ದ ಭಾರತವನ್ನು ವಿಶ್ವದ ದೊಡ್ಡ ದೊಡ್ಡ ರಾಷ್ಟ್ರಗಳು ಬೆರಗುಗಣ್ಣಿನಿಂದ ನೋಡುವಂತೆ ಮಾಡಿದರು . ಭಾರತಿಯ ಆರ್ಥಿಕತೆಯಲ್ಲಿ ಖಾಸಗೀಕರಣವನ್ನು ಪರಿಚಯಿಸಿ ದೋಲಾಮಯನವಾಗಿದ್ದ ಭಾರತದ ಆರ್ಥಿಕತೆಗೆ ಸ್ಥಿರತೆ ತಂದು ಕೊಟ್ಟರು . ಆದ್ರೆ ಅದೇ ಅಂದಿನ ಪ್ರಧಾನಿ ರಾವ್ ಅವರು ದೇಶದ ಉತ್ತಮ ನಾಯಕರಾಗಲಿಲ್ಲ . ಕಾಂಗ್ರೆಸ್ಸಿಗರು ನೆಹರು , ರಾಜೀವ್, ಇಂದಿರಾರನ್ನು ನೆನೆಸಿಕೊಳ್ಳುವಂತೆ ನೆನಪಾಗಲಿಲ್ಲ . ಹೌದು ಅವರೇನು ಗಾಂಧೀ ಕುಟುಂಬದವರಲ್ಲ ....... ಗಾಂಧೀ ಕುಟುಂಬಕ್ಕೆ ವಿಧೆಯರಾಗಿರಲಿಲ್ಲ ...... ... ಇನ್ನು ಮನಮೋಹನ್ ಸಿಂಗ್ ಅವರು ಗಾಂಧೀ ಕುಟುಂಬಕ್ಕೆ ವಿಧೇಯರಾಗಿದ್ದರು ... ಆದರೇ ಅದೇ ಅವರ ವಿಧೇಯತೆ ಜಗತ್ತೇ ಅವರನ್ನು ದುರ್ಬಲ ಅಸಮರ್ಥನೆಂದು ಜರಿಯುವಂತೆ ಮಾಡಿತು . ಇದಕ್ಕೆ ಕಾರಣ ಯಾರು?.. ಸೋನಿಯಾ ಗಾಂಧೀ ...? ....... ರಾಹುಲ್ ಗಾಂಧೀ ?...  ಅಥವಾ ಮನಮೋಹನ್ ಸಿಂಗ್ ಅವರ ಅಧಿಕಾರಾದಾಸೆ ? ..... ದೇಶದ ಅತ್ಯುನ್ನತ್ತ ಅಧಿಕಾರವನ್ನು ಸ್ವೀಕರಿಸಬೇಕೆಂಬುದು ಪ್ರತಿಯೊಬ್ಬ ಭಾರತಿಯನ ಆಸೆ .... ಆದ್ರೆ ಇದೇ ಆಸೆ ಸಿಂಗ್ ಅವರಿಗೆ ಮುಳುವಾಯಿತೇ ......... ಅಧಿಕಾರದ ಆಸೆಯೇ ಅವರನ್ನು ಮೌನ ವ್ರತಕ್ಕೆ ದೂಡಿತೆ ?... ಅವರ ಮೌನದಿಂದ ಎಷ್ಟೊಂದು ಹಗರಣಗಳು ಹುಟ್ಟಿ ಕೊಂಡವು ...... ೨ಜೀ , ಕಾಮನ್ವೆಲ್ತ್ , ವೋಟಿಗಾಗಿ ನೋಟು , ಕಲ್ಲಿದ್ದಲು ,ಹೆಲಿಕಾಪ್ತರ್...... ಹೀಗೆ ಆಕಾಶ , ಭೂಮಿ , ಪಾತಾಳದಲ್ಲೂ ಹುಟ್ಟಿ ಕೊಂಡ ಹಗರಣಗಳಿಗೆ ಸಿಂಗ್ ಅವರು ಕಾರಣರೇ ? ... ಅಥವಾ ಅವರ ಹೆಸರಿನಲ್ಲಿ ಆಳ್ವಿಕೆ ನಡೆಸಿದ  ಕೈಗಳು ಕಾರಣವೇ ?..... ಇವೆಲ್ಲವೂ ಈಗ ನಿಷ್ಪ್ರಯೋಜಕ ಪ್ರಶ್ನೆಗಳು . 

   ಕಳೆದ ದಶಕಗಳಿಂದ ದೇಶಕ್ಕೆ ಒಬ್ಬರೇ ಪ್ರಧಾನಿಯಿದ್ದರೂ ದೇಶವನ್ನಾಳಿದ್ದು ..... ಎರಡು ಪ್ರಧಾನಿಗಳು ... ಒಂದು ಮೌನಿ ಪ್ರಧಾನಿ ಮನಮೋಹನ್ ಸಿಂಗ್ .. ಇನ್ನೊಂದು ಸೂಪರ್ ಪಿ ಎಂ ಸೋನೀಯಾಜಿ ..... ಕಡೆ ಕಡೆಗೇ ಬಂದದ್ದು ಸೋನಿಯಾಜಿ ಸುಪುತ್ರ  ಕಾಂಗ್ರೆಸ್ಸಿಗರ ಬಾಯಲ್ಲಿ ಭಾವಿ ಪ್ರಧಾನಿ ಎಂದು ಕರೆಯಲ್ಪಡುತಿದ್ದ ರಾಹುಲ್ ಜಿ .... ಯುಪಿಎ ಸರಕಾರವೆಂಬ ನಾಟಕದಲ್ಲಿ ರಾಹುಲ್ ಅಂಕಕ್ಕೆ ಪರದೆ ಬೀಳುವಾಗ ರಂಗ ಪ್ರವೇಶ ಮಾಡಿದರೂ ..... ಜನರನ್ನು ಚೆನ್ನಾಗೆ ರಂಜಿಸಿದರು . ಸುಗ್ರೀವಾಜ್ಞೆ ಬಗ್ಗೆ ಅವರಾಡಿದ ರೋಷ ಭರಿತ ಹೇಳಿಕೆ ......  ಸಿಂಗ್ ಅವ್ರ ನಿರ್ಧಾರದ ಬಗ್ಗೆ ನಾನ್ ಸೆನ್ಸ್ ಕಾಮೆಂಟ್ ಗೆ ದೇಶದ ಜನ ರಾಹುಲ್ ಗೆ  ಸರಿಯಾದ ಉಡುಗೊರೆ ನೀಡಿದರು . ೨೦೧೪ ರ ಲೋಕ ಸಭಾ ಚುನಾವಣೆಯ ಉಸ್ತುವಾರಿ ಹೊತ್ತಿದ್ದ  ೪೪ ರ ನವ ಯುವಕನಿಗೆ ಜನ ೪೪ ಸಂಸದರ ಉಡುಗೊರೆ ನೀಡಿದರು ......... ಇತಿಹಾಸದಲ್ಲೇ ಕೇಳರಿಯದ ಸೋಲುಂಡ ಕಾಂಗ್ರೆಸ್ಸ್ ಪ್ರಾದೇಶಿಕ ಪಕ್ಷಗಳ ಸಾಲಿಗೆ ಬಂದು ನಿಂತಿತು . ಇದು ದೇಶದ ಒಬ್ಬ ಅತ್ಯುತ್ತಮ ಅರ್ಥ ಪಂಡಿತನನ್ನು ದುರ್ಬಲ ಗೊಳಿಸಿದ ಕಾಂಗ್ರೆಸ್ಸ್ ಗೆ ದೊರೆತ ಶಾಪವಲ್ಲವೆ...........?

  ಸದಾ ಬೆಲೆಯೇರಿಕೆ ,ಹಗರಣಗಳಿಂದ ಕಂಗೆಟ್ಟಿದ್ದ ಭಾರತಕ್ಕೆ ನಿರೀಕ್ಷೆಯಂತೆ ಮೋದಿ ಅವ್ರ ಸದೃಡ ನಾಯಕತ್ವ ದೊರೆತಿದೆ . ವಿಶ್ವದ ಪ್ರಸಿದ್ದ ರಾಷ್ಟ್ರಗಳು ಸ್ನೇಹ ಹಸ್ತ ಚಾಚುತಿವೆ. ಆದರೇ ಆಡಳಿತದ ಆರಂಭದಲ್ಲೇ ರೈಲ್ವೆ ಮತ್ತಿತರ ಬೆಲೆ ಏರಿಕೆ  ಕಂಡಿರುವುದು ದೇಶದ ಜನರಲ್ಲಿ ಆತಂಕ ಮೂಡಿಸಿದೆ . ಆದರೆ ದೇಶದ ಆರ್ಥಿಕತೆಯನ್ನು ಪುನಶ್ಚೇತನ ಗೊಳಿಸಲು ಇದು ಅನಿವಾರ್ಯ . ನಷ್ಟದ ಕೂಪ ಹಿಡಿದ ರೈಲ್ವೆ ಇಲಾಖೆಗೆ ಮರು ಜೀವ ನೀಡಲು ಮಾಡಿದ ಗಟ್ಟಿ ನಿರ್ಧಾರ . ಬುದ್ಧಿ ಜೀವಿಗಳೇ ಒಮ್ಮೆ ಯೋಚಿಸಿ ಹಲವು ರಾಜ್ಯಗಳ ವಿಧಾನ ಸಭಾ ಚುನವಾಣೆ ಸಮೀಪಿಸುತಿರುವಾಗ ಯಾವುದೇ ರಾಜಕೀಯ ಪಕ್ಷಗಳು ಬೆಲೆಯೇರಿಕೆಯಂತ ಕೆಟ್ಟ ನಿರ್ಧಾರ ತೆಗೆದು ಕೊಳ್ಳಲು ಬಯಸುವುದಿಲ್ಲ . ಅಂತಹ ನಿರ್ಧಾರ ಕೈಗೊಳ್ಳುವುದು ದೇಶದ ಬಗ್ಗೆ ಕಳ ಕಳಿ ಇರುವ ನಾಯಕತ್ವ ಮಾತ್ರ , ದೇಶವನ್ನಾಳುವ ಸದೃಡ ಸರಕಾರದ ದಿಟ್ಟ ಹೆಜ್ಜೆ ಎಂದರೆ ಅತಿಶೊಕ್ತಿಯಿಲ್ಲ. .......... ...ಽಅದ್ರೆ ಇದು ದಶಕಗಳ ನಂತರ ದೊರೆತದ್ದು ವಿಪರ್ಯಾಸ  . 

                                                                              ರಾಜೇಶ್  ಶೆಟ್ಟಿ 

Tuesday, April 15, 2014

ಸಹಿಸಲಾರೆವು... ನಾವು ನಿಲ್ಲಿಸಿ ನಿಮ್ಮ ನಾಟಕ ಸಾಕು..... ಸಾಕು.....

                                               ಮತ್ತೆ ಮೊಳಗಿದೆ ರಣ ಕಹಳೆ
                                               ಭಾರತೀಯರಲ್ಲಿ ಮೂಡುತಿದೆ ಉತ್ಸಾಹದ ಸೆಲೆ
                                               ಬದಲಾವಣೆಗೆ , ಅರಾಜಕತೆ ತೊಡೆದು ಹಾಕಲು
                                               ಕಾದು ಕುಳಿತಿದೆ ಯುವ ಪಡೆ
                                                         
                                                                ದಶ ದಶಕಗಳೇ ಕಳೆದವು
                                                                 ನಾವು ಬಂದ ಮುಕ್ತರಾಗಿ
                                                                 ಆದರೇನು ಪ್ರಯೋಜನ
                                                                 ನಿಂತಿದೆಯೇ ಇಲ್ಲಿ ಗುಲಾಮಗಿರಿತನ?
                                             
                                              ಭಾರತದ ಪವಿತ್ರ ರಾಜಕಾರಣ
                                               ಅದು ಈಗ ನೋಡಲಾಗದ ಚಿತ್ರಣ
                                               ಕಾರಣ ಪ್ರಜಾಪ್ರಭುತ್ವದ ಬಿಲಕ್ಕೆ ನುಗ್ಗಿದೆ ಭಾರಿ ಹೆಗ್ಗಣ
                                               ಝಣ ಝಣವೆನ್ನುತಿದೆ ಕುರುಡು ಕಾಂಚಾಣ
         
                                                                  ಬದಲಾವಣೆ ಗಾಳಿ ಬೀಸುತಿದೆ
                                                                   ಭ್ರಷ್ಟರನ್ನು ಹೊಡೆದೋಡಿಸಲು
                                                                   ನಾವೇನು ಮೂರ್ಕರಲ್ಲ .... ನಿಲ್ಲಿಸಿ ನಿಮ್ಮ ಕಳ್ಳತನ
                                                                   ಉಳಿಸಿ ಕೊಳ್ಳುವೆವು ನಾವು ನಮ್ಮ ಸ್ವಾಭಿಮಾನ
                                                                     
                                                   ನಮಗೆ ಸಿಕ್ಕಿದೆ ನಮ್ಮ ಹಕ್ಕು
                                                   ಬಿಡಿಸುವೆವು ನಿಮ್ಮ ಸೊಕ್ಕು
                                                    ಅನಾಚಾರ, ಅರಾಜಕತೆಗೆ ನೀವು ನೀಡುವ ಕುಮ್ಮಕ್ಕು
                                                     ಸಹಿಸಲಾರೆವು... ನಾವು ನಿಲ್ಲಿಸಿ ನಿಮ್ಮ ನಾಟಕ ಸಾಕು..... ಸಾಕು..... 

Tuesday, April 1, 2014

ಎಪ್ರೀಲ್ ಬಂದಾಗ ನನಗೆ ಮೊದಲು ನೆನಪಾದವರು ಅವರು..................



ಅವನೊಬ್ಬ ಸಾಮಾನ್ಯ ಪೂಜಾರಿ ಹಳ್ಳಿಯ ಗುಡಿಯಲ್ಲಿ ದೇವಾತ  ಕಾರ್ಯದಲ್ಲಿ ತೊಡಗಿದ್ದ ಅವನು ಪ್ರತಿನಿತ್ಯ ಬರುವ ಭಕ್ತರ ಪೂಜಾ ಕಾರ್ಯವನ್ನು ನೆರವೆರುಸುತಿದ್ದ ಒಂದು ದಿನ ಶ್ರೀಮಂತ ಕುಟುಂಬವೊಂದು ಪಟ್ಟಣದಿಂದ ಬಂದಿಳಿದು ಪೂಜಾ ಕಾರ್ಯವನ್ನು ನೆರವೇರಿಸಿ ಪೂಜಾರಿಯ ಆರತಿ ತಟ್ಟೆಗೆ ಐದು ನೂರರ ಗರಿ ಗರಿ ಎರಡು ನೋಟುಗಳನ್ನು  ತುರುಕಿದರು ದಿನಾ ಹತ್ತು ಇಪ್ಪತ್ತು ಎನಿಸುತಿದ್ದ ಪೂಜಾರಿಗೆ ಪಟ್ಟಣದ ಶ್ರೀಮಂತರ ದೈವ ಭಕ್ತಿ ಬಂಡವಾಳವೆಂದು ಗೋಚರಿಸಿ ಮರುದಿನವೇ ಪಟ್ಟಣಕ್ಕೆ ಕಾಲ್ಕಿತ್ತು ಅಲ್ಲಿಯೆ ಒಂದು ಶನಿ ದೇವರ ಗುಡಿ ಕಟ್ಟಿ ಶ್ರೀಮಂತರಿಗೆ ಪೂಜಾ ಕಾರ್ಯವನ್ನು ನೆರವೇರಿಸಲು ಶುರು ಮಾಡಿದ. ತನ್ನ ದೈವ ಭಕ್ತಿಯ ನೀತಿ ನಿಯಮಗಳನ್ನು ಸಡಿಲಗೊಳಿಸಿದ. ಬದುಕಿನ ಜಂಜಾಟ, ಕೆಲಸದ ಒತ್ತಡದ ನಡುವೆಯೂ ನೂರಾರು ಶ್ರೀಮಂತ ಭಕ್ತರು ಈ ಪೂಜಾರಿಯೇ  ದೇವರ ರೂಪದಲ್ಲಿ ಬಂದಿದ್ದಾನೆ ಎಂದು ಪ್ರಾರ್ಥಿಸಿ ಗರಿ ಗರಿ ನೋಟುಗಳನ್ನು ಆರತಿ ತಟ್ಟೆಗೆ ಹಾಕುತಿದ್ದರು. ...... ಹೋದು ಇದು ಬುದ್ದಿವಂತರನ್ನು ಮೂರ್ಕರನ್ನಾಗಿಸುವ ಕಾರ್ಯ. ವಿದ್ಯಾವಂತರನ್ನು ಮೂರ್ಕರನ್ನಾಗಿಸುವ ಉಪಾಯ .







          ಹೌದು ಇಂತದ್ದೊಂದು ಪೂಜಾರಿಯ ಸಾಹಸಕ್ಕೆ ಕೈ ಹಾಕಿ ಯಶ ಕಂಡವರು ನಮ್ಮ ಅರವಿಂದ ಕೇಜ್ರೀವಾಲ್  . ಏಪ್ರೀಲ್ ತಿಂಗಳು ಬಂದಾಗ ನನಗೆ ಮೊದಲಿಗೆ ನೆನಪಿಗೆ ಬಂದವರು ಕೆಜ್ರೇವಾಲರು . ಹೌದು ನಾನು ಕೂಡ ಕೆಜ್ರೀವಾಲರ ಪಕ್ಕಾ ಅಭಿಮಾನಿ ..... ಆದರೆ ಅದು ಕೆಲ ತಿಂಗಳ ಹಿಂದೆ ......... ಭ್ರಷ್ಟಾಚಾರ ,ಆಡಳಿತದ ದುರುಪಯೋಗ, ಅಳುವ ಸರಕಾರದ ಅವ್ಯವಸ್ಥೆ .... ಇದೇ ಕೆಜ್ರೀವಾಲರ ಬಂಡವಾಳಗಳು ..... ಕೇಜ್ರೀವಾಲರು ವಿದ್ಯಾವಂತರನ್ನು ಮೂರ್ಕರನ್ನಾಗಿಸಿದ ಅವರ ಕಾರ್ಯಕ್ಕೆ ಯಾವ ಪದವಿ ನೀಡಿದರೂ ಸಾಲದು . ಆಡಳಿತ ನಡೆಸುವುದು ಮಕ್ಕಳಾಟವೆಂದು ಕೇಜ್ರೀವಾಲರು ತಮ್ಮನ್ನು ತಾವು ಉಳಿಸಿಕೊಳ್ಳಲು ಅದಕ್ಕಾಗಿ ಅವರು ಹೆಣೆದ ಸುಳ್ಳಿನ ಸರಮಾಲೆ ಒಂದೇ .... ಎರಡೇ ... ಒಟ್ಟಿನಲ್ಲಿ ಭ್ರಷ್ಟ ವ್ಯವಸ್ಥೆಯೆಂಬ ಬಿಸಿಲ ಬೇಗೆಯಿಂದ ಬಸವಳಿದಿದ್ದ ದೆಹಲಿ ಜನತೆಗೆ ಕೇಜ್ರೀವಾಲರು ತಂಪೆರೆಯುವ ನೀರಿನಂತೆ ಕಂಡರೂ .... ಅದೇ ನೀರು ವಿಷಪೂರಿತ ಎಂದು ತಿಳಿಯುವ ಮೊದಲೇ .. ಕಾಲ ಮಿಂಚಿತ್ತು .

         ೨೦೧೧ ರಲ್ಲಿ ಅಣ್ಣಾ ಹಜಾರೆಯವರು ಭ್ರಷ್ಟಾಚಾರದ ವಿರುದ್ಧ ಆಂದೋಲನ ನಡೆಸಿದಾಗ ಇಡೀ ದೇಶವೇ ಅವರನ್ನು ಬೆಂಬಲಿಸಿ ಬೀದಿಗಿಳಿಯಿತು. ಜನಲೋಕಪಾಲ್ ಮಸೂದೆಗೆ ಅಣ್ಣಾ ನಡೆಸುತಿದ್ದ ಹೋರಾಟದಲ್ಲಿ ಅವರನ್ನು ಬೆಂಬಲಿಸಿದವರಲ್ಲಿ ಕೇಜ್ರೀವಾಲರು ಒಬ್ಬರು. ಆದರೇ ಇದೆ ಅಣ್ಣಾ ಹಜಾರೆಯವರ ಹೋರಾಟವನ್ನು ಬಂಡವಾಳವನ್ನಾಗಿಸಿ ಕೇಜ್ರೀವಾಲರು ರಾಜಕೀಯ ರಂಗ ಪ್ರವೇಶಿಸಿದರು. ಯು.ಪಿ. ಯೆ  ಸರಕಾರದ ೨ಜಿ , ಕಾಮನ್ವೆಲ್ತ್ , ಕಲ್ಲಿದ್ದಲು ಹೀಗೆ ಸಾಲು ಸಾಲು ಹಗರಣಗಳು ಕೆಜ್ರೀವಾಲರಿಗೆ ವರವಾಗಿ ಪರಿಣಮಿಸಿದವು . ಆಮ್ ಆದ್ಮಿ ಪಕ್ಷವನ್ನು ಕಟ್ಟಿದ ಕೇಜ್ರೀವಾಲರು ಸುಮಾರು ೧೫ ವರುಷಗಳಿಂದ ಆಡಳಿತ ನಡೆಸುತಿದ್ದ ಕಾಂಗ್ರೇಸ್ ಸರಕಾರವನ್ನು ಧೂಳಿಪಟ ಮಾಡಿದರು . ಬೆಲೆಯೇರಿಕೆ ಭ್ರಷ್ಟ ವ್ಯವಸ್ತೆಯಿಂದ ಕಂಗೆಟ್ಟಿದ್ದ ದೆಹಲಿ ಜನತೆ ಭರಪೂರ ಬೆಂಬಲ ನೀಡಿದರು . ... ಆದರೆ ಬಹುಮತ ಸಿಗಲಿಲ್ಲ ..... .... ಇಲ್ಲಿಂದಲೇ ಶುರುವಾಯಿತು ಕೇಜ್ರೀವಾಲರ ನೌಟಂಕಿ ಖದರ್... ಅದಾಗಲೇ ಕೆಜ್ರೀವಲಾಲರಲ್ಲಿ  ಅಧಿಕಾರದ ಆಸೆ ಮನದಲ್ಲಿ ಚಿಗುರೊಡೆದಿತ್ತು . ಚುನಾವಣ ಪೂರ್ವ ತಾನು ವಿರೋಧಿಸುತಿದ್ದ, ಭ್ರಷ್ಟರ ಪಕ್ಷವೆಂದು ಕಂಡ ಕಂಡಲ್ಲಿ ಬೊಗಳೆ ಬಿಡುತಿದ್ದ ಕೇಜ್ರೀವಾಲರು ಅದೇ ಕಾಂಗ್ರೇಸ್ ಪಕ್ಷದ ಬೆಂಬಲ ಪಡೆದು ಸರಕಾರ ರಚಿಸಿದರು . ಆದರೆ ಬುದ್ದಿವಂತ ಕೆಜ್ರೀವಾಲರಿಗೆ ತನ್ನ ಜುಟ್ಟು ಕಾಂಗ್ರೇಸ್ ಕೈಯಲ್ಲಿರುವುದು ತಿಳಿಯಲೇ ಇಲ್ಲ. ತಮ್ಮ ಒಂದೊಂದೇ ನಿಲುವುಗಳನ್ನು ಸಡಿಲಿಸುತ್ತಾ ಬಂದ ಕೆಜ್ರೀವಾಲ್ ದೆಹಲಿಯ ಆಡಳಿತ ವ್ಯವಸ್ಥೆಯನ್ನು ಬೀದಿಗೆ ತಂದಿತ್ತರು. ತಾನು ನೀಡಿದ ಭರವಸೆಗಳನ್ನು ಪೂರೈಸಲು ಸಾಧ್ಯವಾಗದೆ ಇದ್ದಾಗ ಪಕ್ಷದೊಳಗಿಂದಲೇ ಭಿನ್ನಮತವೆಂಬ ಹೊಸ ನಾಟಕ ಶುರುವಾಯಿತು . ಅಧಿಕಾರದ ಅಮಲಿನಲ್ಲಿ ಕೆಲ ಮಂತ್ರಿಗಳು ಕಾನೂನು ವ್ಯವಸ್ತೆಯನ್ನು ಕಡೆಗಣಿಸಿ ಎಲ್ಲೆ ಮೀರಿ ವರ್ತಿಸಿದರು . ಮುಖ್ಯಮಂತ್ರಿಯಾಗುವ ಮೊದಲು ಸರಕಾರೀ ಕಾರು ,ಬಂಗಲೆ ಬಯಸುವುದಿಲ್ಲ ಎಂದಿದ್ದವರು ಕೆಲವೇ ದಿನಗಳಲ್ಲಿ ಅದನ್ನು ಬಾಚಿ ತಬ್ಬಿಕೊಂಡರು. ಚುನಾವಣಾ ಪೂರ್ವ ದೆಹಲಿ ಮಾಜಿ ಮುಖ್ಯಮಂತ್ರಿಯ ಹಗರಣಗಳ ಬಗ್ಗೆ ನನ್ನಲ್ಲಿ ದಾಖಲೆಗಳಿವೆ .... ಅಧಿಕಾರಕ್ಕೆ ಬಂಡ ಕೂಡಲೇ ಅವರನ್ನು ಜೈಲಿಗಟ್ಟುವುದಾಗಿ ಹುಲಿಯಂತೆ ಬೊಬ್ಬಿರಿದ ಕೇಜ್ರೀವಾಲರು ಕೊನೆಗೆ ಇಲಿಯಂತೆ ದಾಖಲೆಗಲಿದ್ದರೆ ನೀಡಿ ಎಂದು ಜನತೆಗೆ ಸವಾಲೆಸೆದರು. ತಾನು ನೀಡಿದ ಸುಳ್ಳು ಭರವಸೆಗಳನ್ನು ಪೂರೈಸಲು ಸಾದ್ಯವಿಲ್ಲ ಎಂದು ಅರಿವಾದ ಕೂಡಲೇ ಅವರಿಗೆ ನೆನಪಾದದು ... ಮತ್ತೆ ಅದೇ ಜನಲೊಕಪಲ್...... ತನಗಿಷ್ಟ ಬಂದಂತೆ ಕಾನೂನು ಕಡೆಗಣಿಸಿ ಜನಲೋಕಪಾಲ್ ಜಾರಿಗೆ ತರಲು ಹೋರಾಟ ಕೇಜ್ರೀವಾಲರು ಅದು ಸಾಧ್ಯವಾಗದೆ ಹೋದಾಗ ಅದನ್ನೇ ನೆಪವಾಗಿಟ್ಟುಕೊಂಡು ತನ್ನ ನಾಟಕಕ್ಕೆ ತೆರೆ ಎಳೆದರು .........                                                    
 ಕೇವಲ ೪೮ ದಿನಗಳಲ್ಲಿ ಅವರ ನಿಜವಾದ ಬಣ್ಣವನ್ನು ದೆಹಲಿ ಜನತೆ ಕಂಡಿತು ...... ಅಷ್ಟಕ್ಕೂ ದೆಹಲಿ ಜನ ಅವರಿಂದ ನಿರಿಕ್ಷೀಸಿದ್ದು ಕೇವಲ ಜನಲೋಕಪಾಲ್ ಮಾತ್ರವಲ್ಲ ........ಉತ್ತಮ ಆಡಳಿತ , ಭ್ರಷ್ಟರ ಸಂಹಾರ , ಬೆಲೆಯೇರಿಕೆಗೆ ಕಡಿವಾಣ , ...... ಆದ್ರೆ ಮಾತಿನಲ್ಲಿ ಮಾತ್ರ ಸಾದಿಸುತಿದ್ದ ಕೇಜ್ರೀವಾಲರು ಕೃತಿಯಲ್ಲಿ ತರಲು ವಿಫಲರಾದರು ........ಕೊನೆಗೆ ಅವರು ದೂಷಿಸಿದ್ದು ಬಿ. ಜೆ. ಪಿ ಪಕ್ಷವನ್ನು .... ಅಧಿಕಾರದ ಆಸೆಗಾಗಿ ಕುತಂತ್ರ ನಡೆಸಿದರೆಂದು ............. ಎಷ್ಟೊಂದು ಹಾಸ್ಯಾಸ್ಪದ ......

ಈಗ ಮತ್ತೆ ವಿದ್ಯಾವಂತರನ್ನು ಮೂರ್ಖರನ್ನಾಗಿಸುವ ನಾಟಕ ಭಾಗ - ೨ ಕ್ಕೆ ಕೇಜ್ರೀವಾಲರು ರೆಡಿಯಾಗುತಿದ್ದಾರೆ . ಇಡೀ ದೇಶವೇ ಬಲಿಷ್ಠ ನಾಯಕನ ನಿರೀಕ್ಷೆಯಲ್ಲಿದ್ದರೆ ಕೇಜ್ರೀವಾಲರು ಮಾತ್ರ ಭ್ರಷ್ಟ ಸರಕಾರದೊಂದಿಗೆ ಕೈ ಜೋಡಿಸಿ ಅರಾಜಕತೆಯನ್ನು ಮುಂದುವರಿಸಲು ಸಹಕರಿಸುತಿದ್ದಾರೆ . ........ ದೇಶದ ಒಳಿತನ್ನು ಬಯಸುವ ಪ್ರತಿಯೊಬ್ಬ ಭಾರತೀಯನ ಪ್ರಶ್ನೆ ...... ಕೆಜ್ರೀವಾಲರೆ .... ನಿಮ್ಮ ಈ ನಾಟಕಕ್ಕೆ ಕೊನೆ ಯಾವಾಗ ? ...... .......ಉತ್ತರ ಕೂಡ ನಾವೇ ಬರೆಯಬೇಕಾಗಿದೆ ...............   









Monday, March 17, 2014

ದೇಶಕ್ಕಾಗಿದೇಶಕ್ಕಾಗಿ ನೀನು ಕುಣಿಕೆಗೆ ಕೊರಳಿತ್ತೆ ಆದ್ರೇ ...


ದೇಶಕ್ಕಾಗಿದೇಶಕ್ಕಾಗಿ ನೀನು ಕುಣಿಕೆಗೆ ಕೊರಳಿತ್ತೆ ಆದ್ರೇ . ಇವ್ರು 





ಪ್ರೀತಿಯ ದೇಶ ಭಕ್ತ ಭಗತ್ ,

                                 ಹೌದು ಮಾರ್ಚ್ ೨೩ ಸಮೀಪಿಸುತಿದ್ದಂತೆ ನಿನ್ನೊಂದಿಗೆ ಏನೋ ಕೆಲ ವಿಷಯಗಳನ್ನು ಹಂಚಿಕೊಳ್ಳಬೇಕೆಂದು ನನ್ನ ಮನಸ್ಸು ತುಡಿಯುತ್ತಿದೆ ನೀನು ದೇಶಕ್ಕಾಗಿ ನಿನ್ನ ಪ್ರಾಣವನ್ನೇ ಮುಡಿಪಾಗಿಸಿದ ಆ ದಿನ ಬಂದಾಗ ನನಗೇನೋ ತಳಮಳವಾಗುತಿದೆ . ಈ ಪತ್ರದಲ್ಲಿ ಕೆಲ ಸತ್ಯ ಸಂಗತಿಗಳನ್ನು ಬರೆಯುತಿದ್ದೇನೆ ನಿನ್ನ ಮನಸಿಗೆ ವೇದನೆಯಾಗಬಹುದು ದಯವಿಟ್ಟು ಈ ನತದೃಷ್ಟ ಭಾರತೀಯನನ್ನು ಕ್ಷಮಿಸು .
     
                        ಹೌದು ಭಾರತಕ್ಕೆ ನಿಮ್ಮಂತಹ ಕೆಚ್ಚೆದೆಯ ವೀರರಿಂದ ಸ್ವಾತಂತ್ರ್ಯ ಬಂತಾದರೂ  ನಾವು ಈಗಲೂ ನತದೃಷ್ಟ ಭಾರತೀಯರು .... ಹೌದು ಈ ಹಾಳಾದ ವ್ಯವಸ್ಥೆ ,ರಾಜಕೀಯ ಅನಾಚಾರದ ಕೂಪ ಹಿಡಿದ ಸಮಾಜ ನಮ್ಮೆಲ್ಲರನ್ನು ನತದೃಷ್ಟರನ್ನಾಗಿಸಿದೆ . ಒಂದೆಡೆಯಿಂದ ಕೋಮು ಕೋಮುಗಳ ನಡುವೆ ದಳ್ಳುರಿ ಹುಟ್ಟಿಕೊಂಡರೆ ಇನ್ನೊಂದೆಡೆ ನಮ್ಮನ್ನಾಳುವ ರಾಜಕೀಯ ಮಹಾನಾಯಕರು ಉರಿಯುವ ಬೆಂಕಿಗೆ ತುಪ್ಪ ಹಾಕಿ ಜ್ವಾಲೆಯನ್ನು ಪ್ರಜ್ವಲಿಸುತಿದ್ದಾರೆ. ಸ್ವಾರ್ಥ ಸಾಧನೆಗೆ ಅಮಾಯಕರನ್ನು ಬಲಿ ಪಶುಗಳನ್ನಾಗಿ ಮಾಡಿ ತಮ್ಮ ಬೆಳೆ ಬೆಯಿಸುತಿದ್ದಾರೆ. ಆಶ್ವಾಸನೆಗಳ ಮಹಾಪೂರವನ್ನು ಹರಿಸಿ ಮೂರ್ಕರನ್ನಾಗಿಸುತಿದ್ದಾರೆ .

                    ನೀನು ಕಂಡ ಭವ್ಯ ಭಾರತ, ಪಾಪಿ ಬ್ರಿಟಿಷರನ್ನು ಹೊಡೆದೋಡಿಸಲು ನೀ ನಡೆಸಿದ ಸಾಹಸ ನಾವು ಇತಿಹಾಸದಲ್ಲಿ ಕಂಡಿದ್ದೇವೆ . ಆದ್ರೆ ಸ್ವಾತಂತ್ರ್ಯ ಬಂದ ಕೂಡಲೇ ಭವ್ಯ ಭಾರತವು ಕೆಲವೇ ಕೆಲ ವಿಕೃತ ಮನಸುಗಳ ಕೃತ್ಯದಿಂದ ಇಬ್ಭಾಗವಾಯಿತು . ಅಲ್ಲಿಂದಲೇ ಹುಟ್ಟಿಕೊಂಡಿತು ಪಾಪಿ ಪಾಕಿಸ್ತಾನದ ನೀಚ ಕೃತ್ಯ ,ನೀನಾ ಎನ್ನುವ ಕಪಟ ಚೀನಾದ ಉಪಟಳ ಇವೆರಡೂ ಪಾಪಿಗಳು ಸೇರಿ ಭಾರತ ಮಾತೆಯ ಮುಡಿಯನ್ನು ಸುಡುತಿವೆ . ನಮ್ಮ ವೀರ ಯೋಧರ ರುಂಡವನ್ನು ಪಾಪಿಗಳು ಚೆನ್ದಾಡಿದರೂ ಬಲಿಷ್ಠ ಪ್ರಜಾಪ್ರಭುತ್ವ ಹೊಂದಿರುವ ಭಾರತ ಇಂತ ಹುಚ್ಚು ನಾಯಿಗಳನ್ನು ಎದುರಿಸಲು ಸಮರ್ಥ ನಾಯಕತ್ವವಿಲ್ಲದೆ ಹೆಣಗಾದುತಿದೆ .

              ಭಾರತಾಂಬೆಯ ಮುಡಿಗೆ ಪಾಪಿ ಪಾಕಿಸ್ತಾನ , ಚೀನಾ ಕೊಲ್ಲಿಯಿಡುತಿದ್ದರೆ ಮಾತೆಯ ಒಡಲನ್ನು ಒಡೆಯಲು ನಮ್ಮಲ್ಲೇ ದುರುಳರು ಹುಟ್ಟು ಕೊಂಡಿದ್ದಾರೆ . ರಾಜಕೀಯದ ದೊಂಬರಾಟ ,ಅಧಿಕಾರದ ದರ್ಪ ಬಳಸಿಕೊಂಡು ಮಾತೆಯ ಮಡಿಲಲ್ಲಿರುವ ಸಂಪತ್ತನ್ನು ಕೊಳ್ಳೆ ಹೊಡೆದು ದೇಶವನ್ನೇ ಮಾರಲು ಹೊರಟಿದ್ದಾರೆ . ಅಭಿವೃದ್ದಿ ಹೆಸರಿನಲ್ಲಿ ಸಾಲು ಸಾಲು ಹಗರಣಗಳ ಸರಮಾಲೆಯನ್ನು ಕಟ್ಟಿದ್ದಾರೆ . ಅಂದು ಮಾರ್ಚ್ ೨೩ ರಂದು ನೀನು ದೇಶಕ್ಕಾಗಿ ಕುಣಿಕೆಗೆ ಕೊರಳಿತ್ತೆ .. ಆದ್ರೆ ಇವ್ರು ... ... ಭಾರತ ಮಾತೆಯ ಕೊರಳಿಗೆ  ಕುಣಿಕೆ ಬಿಗಿಯತಿದ್ದಾರೆ. ಇಷ್ಟು ಮಾತ್ರವಲ್ಲದೆ ದೇಶವೇ ತಲೆ ತಗ್ಗಿಸುವಂತಹ ೨ಜಿ ,ಕಾಮನೆವೆಲ್ತ್ ,ಕಲ್ಲಿದ್ದಲು,ಗಣಿ ಹಗರಣಗಳಿಂದ ಕೋಟ್ಯಂತರ ಹಣ ಗಳಿಸಿ ತಮ್ಮ ವಂಶಾಪಾರಂಪರ್ಯ ರಾಜಕಾರಣದ ಮೇಲೆ ಭವ್ಯ ಬಂಗಲೆ ಕತ್ತುತಿದ್ದಾರೆ. ಇವೆಲ್ಲದರಿಂದ ಭಾರತ ಜರ್ಜರಿತವಾಗಿದೆ.

               ಸ್ತ್ರೀಯರನ್ನು ಪೂಜಿಸುವ ಈ ನೆಲದಲ್ಲಿ ನಾರಿಯು ನ್ಯಾಯದ ನೆರಲಿಲ್ಲದೆ ನರಳುತಿದ್ದಾಳೆ  ಎಲ್ಲಿ ನೋಡಿದರೂ ಅತ್ಯಾಚಾರ,ಕೊಲೆ ,ಸುಲಿಗೆ,ಒಟ್ಟಿನಲ್ಲಿ ಈ ಸಮಾಜ ವ್ಯವಸ್ಥೆಯಲ್ಲಿ ಸ್ತ್ರೀಯರ ರಕ್ಷಣೆ,ಕಲ್ಯಾಣ,ಸಬಲೀಕರಣ ಎಂಬ ಮಾತುಗಳು ಕೃತಿಗೆ ಮಾತ್ರ ಸೀಮಿತವಾಗಿದೆ. ಪಾಪಿ ಕಾಮ ಪಿಶಾಚಿಗಳು ಸ್ತ್ರೀಯನ್ನು ಭೋಗದ ವಸ್ತುವಂತೆ ಉಪಯೋಗಿಸಿ ತಮ್ಮ ವಿಕೃತ ರೂಪವನ್ನು ಪ್ರದರ್ಶಿಸುತಿವೆ . ಆದ್ರೆ ಇಷ್ಟೆಲ್ಲಾ ನಡೆಯುತಿದ್ದರೂ ಆಳುವ ಸರಕಾರ ಕುರುಡಾಗಿದೆ ..................... ಹೌದು ಇದು ನೀ ಕಂಡ ಭವ್ಯ ಭಾರತದ ಇಂದಿನ ಅಸಲಿ ರೂಪ .............. ಲೇಖನಿ ಹಿಡಿದು ಬರೆಯುವ ನನ್ನ ಕೈಗಳು ಮನಸಿನ ನೋವಿನಿಂದ ತಡಕಾಡುತಿವೆ ....... ಆದರೇ ನೀನು ಖಡ್ಗ ಹಿಡಿದು ಮಾತೆಯ ರಕ್ಷಣೆಗೆ ಹೋರಾಡಿದವನು .............ದಯ ಮಾಡಿ ನನ್ನನು ಕ್ಷಮಿಸು .................. ನಿನ್ನ ಮನಸಿನ ವೆದನೆಗೆ.....

     ಪತ್ರದ ಕೊನೆ ಹಂತಕೆ ತಲುಪಿದ್ದೇನೆ  ಈ ಸಮಯದಲ್ಲಾದರೂ ನಿನಗೊಂದು ಸಿಹಿ ಸುದ್ದಿಯನ್ನು ಹೇಳಲೇಬೇಕಾಗಿದೆ ..... .. ಹೌದು ......... ಹಾಳು ಕೂಪ ದಾರಿ ತಲುಪಿದ ಭಾರತಕ್ಕೆ ಎಲ್ಲೋ ಒಂದು ಆಶಾಕಿರಣ ಗೋಚರಿಸುತಿದೆ ..... ಬಲಿಷ್ಠ ಭಾರತಕ್ಕೆ ಬೇಕಾದೆ ಸಿಂಹ ಗರ್ಜನೆಯ ನಾಯಕನೊಬ್ಬ ಬರುತಿದ್ದಾನೆ.......... ದೇಶದ ಉಳಿವು ಅವನಿಂದ ಮಾತ್ರ ಸಾದ್ಯ ...... ಅವನೊಬ್ಬ ಸಾಮಾನ್ಯ ಚಾಯ್ ವಾಲ ................................ ಖಂಡಿತ ನಿನಗೆ ಮತ್ತೊಂದು ಸಿಹಿ ಸುದ್ದಿಯೊಂದಿಗೆ ಮೇ ೧೬ ರಂದು ಪತ್ರ  ಬರೆಯುತ್ತೇನೆ ..................................................
             
                                                                                             ಇತೀ ನಿನ್ನ
                                                                                             ಭಾರತೀಯ