Friday, October 12, 2018

ವರ್ಷವಿಡೀ ಮಳೆಯಿಲ್ಲ
ಕುಡಿಯಲು ಹನಿ ನೀರಿಲ್ಲ
ಇಂತಹ ಸನ್ನಿವೇಶಕ್ಕೆ ಕಾಲ ದೂರವಿಲ್ಲ
ಅನುಭವಿಸಲಿದ್ದೇವೆ ನಾವು ನಮ್ಮ ಪಾಪದ ಫಲ
ಅಳಿಯುತಿದೆ ಕಾನನ
ಏರುತಿದೆ ತಾಪಮಾನ
ಮುಂದೊಂದು ದಿನ ಈ ಭೂಮಂಡಲವಾಗಬಹುದು ಸ್ಮಶಾನ...!
ಯಾಕೆ ಹರಿಯುತ್ತಿಲ್ಲ ಭವಿಷ್ಯದೆಡೆಗೆ ನಮ್ಮ ಜ್ಞಾನ...?
ಶುಭ್ರ ಗಂಗೆ ಕೆಡುತಿದ್ದಾಳೆ
ಪ್ರಕೃತಿ ಮಾತೆ ಬರಿದಾಗುತಿದ್ದಾಳೆ
ಈಗ ಎಲ್ಲಿದೆ ನಮ್ಮ ಆ ಪ್ರಕೃತಿಯ ಸೊಬಗು..?
ಮುಂದೆ ಭಿತ್ತಿ ಚಿತ್ರದಲ್ಲಿ ನೋಡಬೇಕೆನೋ ನಮ್ಮ ಮಗು ...!
ಬಳಸುತಿದ್ದೇವೆ ಅಸಂಖ್ಯಾತ ಮೋಟಾರು ಕಾರು
ಬೆಳೆಯುತ್ತಿದೆ ಕಾರ್ಖಾನೆಗಳೆಂಬ ರಾಕ್ಷಸರು
ಇವುಗಳು ಉಗುಳುತ್ತಿವೆ ಕರಿ ಹೊಗೆ ಬೂದಿ...
ಹೀಗೆ ಕಟ್ಟಿಕೊಳ್ಳುತಿದ್ದೇವೆ ನಾವೆ ನಮ್ಮ ಸಮಾಧಿ...!
ಕಾಲ ಮಿಂಚಿಲ್ಲ ಸ್ವಲ್ಪ ಕಣ್ತೆರೆದು ನೋಡಿ..
ಆದಷ್ಟು ಮಾಲಿನ್ಯ ಕಡಿಮೆ ಮಾಡಿ
ನಮ್ಮ ಗುಂಡಿಯನ್ನು ನಾವೆ ತೋಡುತ್ತ
ಯಾಕೆ ನಡೆಯಬೇಕು ಬದುಕಿನ ಬಂಡಿ ಸಾಗಿಸುತ್ತ...?
 ರಾಜೇಶ್
ಮತ್ತೆ ಬಂದೀತೇ ಆ ನನ್ನ ದಿನಗಳು ....?
ಮನದಲ್ಲಿ ಇಂದಿಗೂ ಅಚ್ಚಾಗಿರುವ ನೆನಪುಗಳು
ನೋವು ನಲಿವಿಗೆ ಜತೆಗಿದ್ದ ಹೈಕಳು
ಅರಿವಿಲ್ಲದೆ ಕಳೆದು ಹೋಗುತಿದ್ದ ಬೇಸಿಗೆ ರಜೆಗಳು ..!
ಮತ್ತೆ ಬಂದೀತೇ ಆ ನನ್ನ ದಿನಗಳು...?
ಲಂಗು ಲಗಾಮಿಲ್ಲದೆ ಆಡಿದ ಆಟಗಳು
ಮರದಿಂದ ಮರಕ್ಕೆ ಕಟ್ಟಿದ ಜೋಕಾಲಿಗಳು
ಬಯಲಲ್ಲಿ ಕಟ್ಟಿದ ದೇವರ ಗುಡಿಗಳು ....!
ಮತ್ತೆ ಬಂದೀತೇ ಆ ನನ್ನ ದಿನಗಳು...?
ಅಜ್ಜಿ ಹೇಳಿದ ನೀತಿ ಕತೆಗಳು
ಅಜ್ಜನ ಮಾದುರ್ಯ ತುಂಬಿದ ಪದಗಳು
ಸ್ವಚ್ಛ ಪರಿಸರದಲ್ಲಿ ನವಿಲು ಕೋಗಿಲೆಗಳ ಗಾನಗಳು ...!
ಎಲ್ಲಿಂದ ಬಂದೀತು ನನ್ನ ಆ ದಿನಗಳು ..?
ಕತೆ ಹೇಳುವ ಅಜ್ಜಿಯ ಮಾತು ಮೌನವಾಗಿದೆ
ಪದ ಹಾಡುವ ಅಜ್ಜನ ಗಂಟಲು ಕೆಟ್ಟು ಹೋಗಿದೆ
ಇನ್ನು ನವಿಲು ಕೋಗಿಲೆ ....!
ಎಲ್ಲಿದೆ ಅವುಗಳಿಗೆ ಇಲ್ಲಿ ನೆಲೆ ...... ?
ಹೇಗೆ ಬಂದೀತು ನನ್ನ ಆ ದಿನಗಳು ... ?
ಜೋಕಾಲಿ ಕಟ್ಟಲು ಮರಗಳ ಹುಡುಕುವುದೆಲ್ಲಿ
ಎಲ್ಲಿ ನೋಡಿದರೂ ಈ ಪರಿಸರ ಖಾಲಿ ಖಾಲಿ .....!
ಅವುಗಳೇನಿದ್ದರೂ ನೆನಪು ಈ ಸುಡುವ ಬಿಸಿಲಿನಲ್ಲಿ ...!
ಹೇಗೆ ಮರುಕಳೀಸಿತು ನನ್ನ ಆ ದಿನಗಳು ... ?
ಶುರುವಾಯಿತೆಂದರೆ ಈ ಕೆಟ್ಟ ಸಮ್ಮರು
ಈಗೇನಿದ್ದರೂ ಕ್ಯಾಂಪ್ ಗಳದ್ದೇ ದರ್ಬಾರು
ಹೇಗೆ ನೆನಪಾದೀತು ಅಜ್ಜಿ ಮನೆಯ ಹೆಸರು ..?
ಸ್ಪರ್ಧಾ ಜಗತ್ತಿನಲ್ಲಿ ಬಿಗಿ ಹಿಡಿದಿದೆ ನನ್ನ ಉಸಿರು ..... !
ರಾಜೇಶ್
ಮುಂಗಾರು ಮುತ್ತಿಕ್ಕುತ್ತಿರಲು
ಮೇಘಗಳು ನಾಚಿ ನೀರಾಗಲು
ಧರೆ ಹರುಷದಿ ಸ್ವಾಗತಿಸಲು
ಮೌನ ಮನವೊಂದು ಸದ್ದಿಲ್ಲದೆ ಸಾಗುತಿದೆ
ನಿನ್ನ ಬಣ್ಣದ ಕೊಡೆಯಾಸರೆಗೆ
ಬಣ್ಣ ತುಂಬಿದ ಕನಸುಗಳೊಂದಿಗೆ
ನಿನ್ನ ಬಣ್ಣದ ಕೊಡೆಯಾಸರೆಯಲ್ಲಿ
ಮುದ್ದಾದ ಆ ನಿನ್ನ ಹೆಜ್ಜೆ ಗುರುತುಗಳಲ್ಲಿ
ಆ ಹೆಜ್ಜೆಗೊಂದು ಕನಸು ನಾ ಸಾಗುವ ದಾರಿಯಲ್ಲಿ
ಅನು ಕ್ಷಣ ಮರೆಯಾಗದಿರು ಈ ಪುಟ್ಟ ಹೃದಯದಲಿ
ನಾ ಮುಂಗಾರು ನೀ ಮೇಘ
ದಯಪಾಲಿಸು ನಿನ್ನ ಹೃದಯದಲ್ಲಿ ಸ್ವಲ್ಪ ಜಾಗ
ಹಾಡಿ ಕುಣಿಯುತಿದೆ ನನ್ನ ಮನವೀಗ
ಪ್ರೇಮ ಕವಿತೆಗೆ ದನಿಗೂಡಿಸು ನಿನ್ನ ಸವಿರಾಗ
ನನ್ನ ಕನಸುಗಳಿಗೆ ಬಣ್ಣ ಹಚ್ಚಿದವಳು ನೀನು
ಆ ಕನಸುಗಳ ಲೋಕವೆ ನಿನ್ನ ಕಣ್ಣು
ನನಗಾಗಿ ಬ್ರಹ್ಮನು ಸೃಷ್ಟಿಸಿದ ಕರಾವಳಿ ಹೆಣ್ಣು
ನಿನ್ನ ವರ್ಣಿಸಲು ಪದಗಳಿವೆ ಇನ್ನೂ ಏನೇನೂ
ಕನಸಿನ ಲೋಕವೇ ಈ ಪ್ರೇಮ
ಪಿಸು ಮಾತುಗಳ ರಾಗವೆ ಇಲ್ಲಿ ಸರಿಗಮ
ಎರಡು ಪುಟ್ಟ ಹೃದಯಗಳ ಸಂಗಮ
ಕೂಡಿ ಬಾಳಿದರೆ ಪ್ರೇಮ ಅನುಪಮ..!
 ರಾಜೇಶ್ ( ,ಈ ಕವಿತೆಯಲ್ಲಿ ಬರುವ ಎಲ್ಲಾ ಪಾತ್ರಗಳು ಕಾಲ್ಪನಿಕ)
ಒಂದೆಡೆ ಪಾಪಿ ಪಾಕಿಸ್ತಾನ
ಇನ್ನೊಂದೆಡೆ ಕಪಟಿ ಚೀನಾ
ನಡುವೆ ಇಡುತಿದ್ದೀರಿ ನೀವು ಮಾತೆಯ ಮಡಿಲಿಗೆ ಗುನ್ನ
ಒಟ್ಟಾಗಿ ಕಂಗೆಡಿಸುತಿದ್ದೀರಿ ನೀವು ಅವಳನ್ನ
ಆಕೆಯ ಅಡಿಯಿಂದ ಮುಡಿಯವರೆಗೆ
ಮಾಡಿದ್ದೀರಿ ನೀವು ಸುಲಿಗೆ
ಇನ್ನೂ ಯಾಕೆ ನಿಮಗೆ ಅವಳ ಮೇಲೆ ಹಗೆ
ಅವಳ ರಕ್ಷಣೆಗೆ ನಿಂತ ನಮ್ಮನ್ನು ಬಿಡುತಿಲ್ಲ ನಿಮ್ಮ ಧಗೆ ..!
ಬಂಧು ಬಳಗ ತೊರೆದು ಬಂದಿದ್ದೇವೆ
ಕಣ್ ಮುಚ್ಚದೆ ಮಾಡುತಿದ್ದೇವೆ ನಿಮ್ಮ ಸೇವೆ..!
ನಮ್ಮಲ್ಲೂ ನಿಮ್ಮ ಕೊಳಕು ರಾಜಕೀಯವೆ ..?
ಹೀಗೆ ನಡೆದರೆ ಶತ್ರುಗೆ ಬಲಿಯಾಗೋದು ನಾಳೆ ನಾವೆ.!
ಕೊರೆವ ಚಳಿ ಲೆಕ್ಕಕ್ಕಿಲ್ಲ ಎನಗೆ
ಉರಿವ ಬಿಸಿಲು ಭಂಗ ತರಲಿಲ್ಲ ನೆಮ್ಮದಿಗೆ
ನಿಮ್ಮ ಕೊಳಕು ಮಾತು ಕೇಳಿ ಒಮ್ಮೆಗೆ
ಧೃತಿಗೆಡಿಸಿತು ಧೈರ್ಯ ಮೆಲ್ಲಗೆ.!
ರಾಜಕೀಯದ ದಾಳವಾಗಿಸದಿರಿ ಎನ್ನ
ಪ್ರೀತಿಯಿಂದ ಪೊರೆವೆನು ನಿಮ್ಮನ್ನ..!
ತಪ್ಪಿ ನಡೆದರೆ ನಿಮ್ಮ ನಡೆಯನ್ನ
ಕರುಣಿಸಲಾರ ದೇವ ಒಳ್ಳೆ ಮರಣವನ್ನ ..!
ಪಕ್ಷ ಪಂಥಗಳು ನಿಮ್ಮೊಳಗಿರಲಿ
ನಿಮ್ಮ ಕಾಯೊ ಪಹರೆ ಬಗ್ಗೆ ಅಭಿಮಾನವಿರಲಿ
ಭವ್ಯ ಭಾರತ ಒಂದಾಗಿರಲಿ
ಬಡಪಾಯಿ ಯೋಧನ ಮೊಗದಲ್ಲಿ ನಗುವರಳಲಿ ...!
ರಾಜೇಶ್
#stand_with_Indian_army
ದೇಶ ಕಾಯುತ್ತಿದೆ
ಮನಸು ತುಡಿಯುತಿದೆ
ಕದನ ಕಲಿಗಳ ಮುಡಿಗೆ
ವಿಜಯ ಕಿರೀಟ ಕಾಯುತ್ತಿದೆ..!
ಬದ್ಧ ವೈರಿಗಳ ಕಲಹ
ಸಾಗಿ ಬಂದ ದಾರಿ ಹಲವು ತರಹ
ಅಲ್ಲಿ ಏನಿದ್ದರೂ ನಮ್ಮದೆ ಹವಾ
ಗೆಲುವೆಂಬುದು ಅವರಿಗೆ ಸ್ವಾಹ ಸ್ವಾಹ ...!
ವಿಜಯದ ನಗುವಿಗಿರುವುದು ಒಂದೇ ಮೆಟ್ಟಿಲು
ಹುಮ್ಮಸ್ಸು ತುಂಬಿದೆ ವಿಜಯದ ಶಿಖರವೇರಲು
ತರೆದಿಲ್ಲ ನಿಮಗೆ ವಿಜಯದ ಬಾಗಿಲು
ವಿಜಯದ ವಿರಾಟ ರೂಪಕ್ಕೆ ನೀವಾಗುತ್ತೀರಿ ಕಂಗಾಲು
ಕೋಟಿ ಹೃದಯಗಳು ಆಶಿಸುತಿರಲಿ
ವಿರಾಟನು ಅಲ್ಲಿ ವೀರನಾಗಲಿ
ಯುವರಾಜನು ಮಹಾರಾಜನಾಗಲಿ
ಗೆಲುವಿನ ದೋಣಿ ದಡ ಸೇರಲಿ...!
ಭಾರತ ಮಾತೆಯ ಮೊಗದಲ್ಲಿ
ರವಿಯು ಚಿತ್ತಾರ ಮೂಡಿಸಲಿ
ರೋಹಿತನು ಗೆಲುವಿನ ಭುವನ ನಿರ್ಮಿಸಲಿ
ಯಾದವ ಜಾಧವರು ಪಾಕಿಗಳ ಕಂಗೆಡಿಸಲಿ...!
ಗೆಲುವು ಕಸಿವ ಪಾಂಡಿತ್ಯರು ನಾವು
ಜನ್ಮ ಭೂಮಿಗೆ ಸಂಪ್ರಿತಿಯಿಂದ ಹೋರಾಡುವೆವು ..!
ಅರ್ಪಿಸಿ ಮಾತೆಯ ಪಾದಕ್ಕೆ ಗೆಲುವು ..!
ಜತೆ ನಿಂತು ಜೈಕಾರ ಹಾಕುವೆವು ನಾವು ...!
ರಾಜೇಶ್

No automatic alt text available.


ಉಸಿರಾಡೋ ಗಾಳಿಯೂ ಸುಳ್ಳಾಡುತಿದೆ..
ಮೆಲ್ಲ ಮೆಲ್ಲಗೆ ಎದೆ ಬಡಿತವೂ ವಂಚಿಸುತಿದೆ
ಮತ್ತೆ ಮತ್ತೆಗಳಲ್ಲಿ ಮಾತು ಕೊನೆಯಾಗುತಿದೆ
ವಿಷಯ ವಿಷಮ ದಾರಿದ್ರ್ಯ ಕಾಡುತಿದೆ
ಪ್ರೀತಿ ಮರುಳೋ ನಾ ಮರುಳೋ..
ಇಲ್ಲ ಯೌವನದ ಅರಳು ಮರುಳೋ...
ಕಾರಣವಿಲ್ಲದೆ ಹತ್ತಿರವಾದಳು ಅವಳು
ಪ್ರೇಮ ಪಾಶದಿ ಹೃದಯಕ್ಕೆ ಸಿಕ್ಕಿತು ಉರುಳು
ಕವಿತೆಯಲ್ಲಿ ವರ್ಣಿಸಿದೆ
ಕನಸು ಗಳಲ್ಲಿ ಬಂಧಿಸಿದೆ
ಕಂಡ ಕನಸುಗಳಲ್ಲೇ ಆಶಾಗೋಪುರ ನಿರ್ಮಿಸಿದೆ
ಕೊನೆಗೂ ಪಾಪಿ ಹೃದಯದಿ ಬಚ್ಚಿಡಲು ಸೋತು ಹೋದೆ..!
ಅಂದುಕೊಂಡೆ ಕನಸುಗಳಿಗೆ ಬೇಲಿ ಹಾಕೊರ್ಯಾರು...?
ಕನಸ ಹಾದಿಗೆ ಮುಳ್ಳು ತುಂಬಿದ ವಿಧಿಯಾಟ ಬಲ್ಲವರಾರು...?
ಅವಳ ವಿಳಾಸವಿಲ್ಲದ ಅಲೆಮಾರಿ ನಾನ್ಯಾರು..?
ಮೂಕ ಹಕ್ಕಿಯ ರೋಧನೆ‌ ಇಲ್ಲಿ ಕೇಳೋರ್ಯಾರು..?
ಕವಿತೆ : ಕಲ್ಪನೆಗೆ ನಿಲುಕಿದ್ದು
ಚಿತ್ರ ಕೃಪೆ : ಕದ್ದಿದ್ದು
Image may contain: sky


ಹಾರಿ ಹೋಗು ಪಾರಿವಾಳವೆ
ಸುಮ್ಮನೇಕೆ ಕುಳಿತಿರುವೆ
ಹೇಳು ಹೋಗು ನನ್ನವಳಿಗೆ
ಈ ಪುಟ್ಟ ಹೃದಯದ ಕೋರಿಕೆ ..!
ನೀ ಅರುಹುವೆಯ ಅವಳ ಕಿವಿಗೆ
ನನ್ನ ಈ ಹಳಿ ತಪ್ಪಿದ ಜೀವದ ಬಯಕೆ
ನನ್ನ ಪಿಸು ಮಾತಿಗೆ ಕಿವಿಯಾಗುವೆಯಾ ಪಾರಿವಾಳವೆ..?
ಕಣ್ಣೀರ ಸಂದೇಶಕ್ಕೆ ನೀ ವರದಿಗಾರನಾಗುವೆ .!
ಹೇಳು ಹೋಗು ಪಾರಿವಾಳವೆ ನನ್ನ ಮನದೆನ್ನೆಗೆ
ಅವಳು ಕೊಟ್ಟ ನವಿಲು ಗರಿ
ಮರಿ ಹಾಕಿಲ್ಲವೆಂದು
ಅವಳೊಂದಿಗಿನ ನೆನಪುಗಳು ಬಣ್ಣ ಮಾಸಿಲ್ಲವೆಂದು
ಕಂಡ ಕನಸುಗಳು ಮಾತ್ರ ಕಮರಿ ಹೋಗಿವೆಯೆಂದು..!
ಹೇಳು ಹೋಗು ಪಾರಿವಾಳವೆ ನನ್ನ ಮನದ ದೇವತೆಗೆ
ಅವಳ ಸೌಂದರ್ಯ ಕಂಡ ಕಣ್ಣುಗಳು ಮುಸುಕಾಗಿವೆಯೆಂದು
ಅವಳ ವರ್ಣಿಸಿ ಬರೆದ ಕೈಗಳು ನಡುಗುತಿವೆಯೆಂದು
ಅಂದು ತುಂಬಿದ ಹೃದಯ ಸಂಪತ್ತು ಬರಿದಾಗಿಲ್ಲವೆಂದು
ತಿಳಿ ಹೇಳು ಹೋಗು ಪಾರಿವಾಳವೆ
ಸುಳ್ಳು ಮಾತುಗಳು ಅವಳಿಗೆ ಬರುವುದಿಲ್ಲವೆಂದು
ಅಂದು ಅವಳಾಡಿದ ಮಾತೊಂದು
ನಿಜವಾಗಲಿಲ್ಲ ಅಂದಿನಿಂದ ಇಂದು
ನಾ ಕಂಡಿಲ್ಲ ಈ ಜಗದಿ ಅವಳು ಹೇಳಿದ ಅವಳಿಗಿಂತ ಒಳ್ಳೆಯ ಹುಡುಗಿ ಎಂದೆಂದೂ...!
ಕವಿತೆ: ಕಾಲ್ಪನಿಕ
ಚಿತ್ರ ಕೃಪೆ : ಗೂಗಲ್